Thursday, May 15, 2008

ಅನಿಸಿಕೆ

ನಮಸ್ಕಾರ,
ಇದರಲ್ಲಿ ಏನು ಬರೆಯಬೇಕು ಅಂತ ಗೊತ್ತಾಗುತ್ತ ಇಲ್ಲ. ಆದರೂ ಬರೀಬೇಕು ಅನ್ನಿಸುತ್ತಾ ಇದೆ. ಇದರಲ್ಲಿ ನಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದು ಅಂತ ಗೊತ್ತಾಗಿದ್ದೆ ನಿನ್ನೆ ಮತ್ತು ಇವತ್ತು ಅಂದ್ರೆ ದಿನಾಂಕ ಮೇ ೧೪ ಮತ್ತು ೧೫, ಬುಧವಾರ ಹರ್ಷರವರ ಒಂದು ಇ-ಮೆಯಿಲ್ ನೋಡಿದ ಮೇಲೆ. ಮತ್ತೆ ಹರ್ಷ ಚಾಟಿಂಗ್ ನಲ್ಲಿ ಕೇಳಿದರು ನನ್ನ ಬ್ಲಾಗ್ ನಲ್ಲಿ ಇರುವ ಅಂಕಣ ಓದಿದ್ರ ನಿಮ್ಮ ಅಭಿಪ್ರಾಯ ಏನು ಹೇಳಿ ಅಂತ. ನನಗೆ ಕೆಲಸ ಇದೆ ಸಂಜೆ ಓದಿ ಹೇಳುತ್ತೇನೆ ಅಂತ ಹೇಳಿದೆ. ಹರ್ಷರವರ ಸ್ವಂತ ಊರು ದಾವಣಗೆರೆ, ಅವರ ಊರು ಬಿ ಬಿ ಸಿ ನ್ಯೂಸ್ ಚಾನೆಲ್ ನಲ್ಲಿ ಮೂರು ಬರಿ ಪ್ರಸ್ತಾಪ ಆಗಿದೆಯೆಂತೆ. ಅದರಲ್ಲಿ ಮೊದಲೆನೆಯದು - ಬಾಬ್ರಿ ಮಸೀದಿ ಹೊಡೆದು ಹಾಕಿದಾಗ ಅವರ ಬಾಲ್ಯದ ನೆನಪುಗಳು, ಡ್ಯಾಮ್ ಗೆ ಬಸ್ ಬಿದ್ದು ೮೦ ಜನ ಸತ್ತಿದ್ದು ಮತ್ತು ಬೋರ್ ವೆಲ್ ಗೆ ಕರಿಯ ಎಂಬ ಹುಡುಗ ಬಿದ್ದು ಸತ್ತ ಬಗ್ಗೆ ತುಂಬ ಚೆನ್ನಾಗಿ ಬರೆದಿದ್ದಾರೆ. ಇವತ್ತಿನ ಪ್ರಜಾವಾಣಿ ದಿನ ಪತ್ರಿಕೆಯಲ್ಲಿ ಗೂಗಲ್ ಬಗ್ಗೆ ಓದಿದಾಗ, ಅದರಲ್ಲಿ ಕನ್ನಡದಲ್ಲೂ ಯಾವುದೇ ವಿಷಯಗಳನ್ನು ಹುಡುಕಬಹುದು ಮತ್ತು ನಮ್ಮ ಸ್ವಂತ ಬ್ಲಾಗ್ ಕ್ರಿಯೇಟ್ ಮಾಡಿ ಅದರಲ್ಲಿ ನಮ್ಮ ಅಭಿಪ್ರಾಯಗಳನ್ನು ತಿಳಿಸಬಹುದು ಅಂತ, ಅದಕ್ಕೆ ನಾನು ಇವತ್ತು ನನ್ನದೇ ಆದ ಸ್ವಂತ ಬ್ಲಾಗ್ ಕ್ರೆಯೇಟ್ ಮಾಡಿ ನಾನೂ ಏನಾದ್ರೂ ಬರೀಬೇಕು ಅಂತ ಇಸ್ಟ್ಟನ್ನು ಬರೆದಿದ್ದೆನಿ. ವಿಷಯಗಳು ತುಂಬ ಇದೆ ಬರೆಯಲು ಆದರೆ ಸಮಯದ ಅಭಾವ ಇದೆ ಇಸ್ಟ್ಟನ್ನು ಇದರಲ್ಲಿ ಬರೆಯಲು ಒಂದು ಗಂಟೆ ಮೂವತ್ತು ನಿಮಿಷ ಆಯ್ತು. ಹಾಳೆಯಲ್ಲಿ ಬರೆದಸ್ತ್ತು ಸುಲಭ ಅಲ್ಲ ಇದರಲ್ಲಿ ಬರೆಯುವುದು, ಬಹಳ ಕಸ್ಟ್ಟ ಸಮಯ ಬಹಳ ತೆಗೆದುಕೊಳ್ಳುತ್ತದೆ.

No comments: